ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, March 24, 2010














ಜೀವನ ಅನುಭವಿಸಬಲ್ಲವರಾದರೆ ಅದೊಂದು ಸಿಹಿಯಾದ ಅನುಭವ.

ಸಮುದ್ರವನ್ನೂ, ಕತ್ತಲನ್ನೂ, ಕಣಿವೆಗಳನ್ನೂ ಮಹಾವಲಯಗಳನ್ನೂ ಭೆಧಿಸಿಕೊಂಡು
ಕ್ಷಿತಿರೆಖೆಯಿಂದ ಹೇಗೆ ಸೂರ್ಯಕಿರಣ ಪ್ರಭವಿಸುತ್ತದೋ ...
ವಿಷಾದಗಳನ್ನು, ವ್ಯಥೆಗಳನ್ನೂ ಸೀಳಿಕೊಂಡು ಕಿರುನಗೆ ಕೂಡಾ ಉದಯಿಸುತ್ತದೆ...
ಒಳ್ಳೆಯ ಗೆಳೆಯನಿದ್ದರೆ........
ಕೆಲವು ಮಧುರ ಸಂಬಂಧಗಳು ನೆನೆದ ಹಾಗೆಲ್ಲಾ ಖುಷಿ ಕೊಡುತ್ತವೆ.
ಸ್ವೀಟ್ ಮೇಮೊರೀಸ್ ಎನ್ನುತ್ತಾರಲ್ಲಾ ಹಾಗೆ.. ಅದರಲ್ಲೇ ಖಾಯಂ ಉಳಿದಿರುತ್ವೆ.
ಎಲ್ಲಾ ಸಂಬಂಧಗಳಿಗೂ ನಾವು ಆತ್ಮೀಯ ಸಂಬಂಧ ಎನ್ನಲಾಗುವುದಿಲ್ಲ. ಆತ್ಮೀಯ ಸಂಬಂಧ
ಎಂಬುದೊಂದಿದ್ದರೆ ಅದು ಒಬ್ಬರನ್ನೊಬ್ಬರು ಗೌರವಿಸುತ್ತದೆ, ಇಷ್ಟಪಡುತ್ತದೆ, ಜಗಳ ಕಾಯುತ್ತದೆ,
ಮುನಿಸಿಕೊಳ್ಳುತ್ತದೆ, ಹರಟೆ ಕೊಚ್ಚುತ್ತದೆ, ನಗಿಸುತ್ತದೆ, ನಲಿಸುತ್ತದೆ, ಏನನ್ನು ಬೇಕಾದರೂ ನಿಸ್ಸಂಕೋಚವಾಗಿ ನುಡಿಸುತ್ತದೆ... ಅಥವಾ ಇದ್ಯಾವುದನ್ನೂ ಮಾಡುವುದಿಲ್ಲ.. ಅದೊಂದು ಮಲ್ಲಿಗೆಯ ಸುವಾಸನೆಯಂತೆ ಬದುಕಿದ್ದಷ್ಟೂ ಕಾಲ ಪರಿಮಳ ಬೀರುತ್ತಲೇ ಇರುತ್ತದೆ..... ನೀವೇನಂತೀರಿ?














ಒಂದೊಂದು ಭಾವವನ್ನು ಮನಸ್ಸಿನಿಂದ ಕಾಗದದ ಮೇಲೆ ಇಳಿಸಲು ಕೆಲವೊಮ್ಮೆ ಎಷ್ಟು ಕಷ್ಟ ಅನುಭವಿಸಿ ಬಿಡ್ತೇವೆ...
ಹೌದು ನನ್ನ ಕುಂಚವನ್ನು -ಸಪ್ತ ವರ್ಣಗಳನ್ನು ಸ್ನೇಹದಿಂದ ಮಾತಾಡಿಸುವ ನನ್ನ ಕುಂಚವನ್ನು..,
ಮೇಘಗಳ ಅಡಿ ಹೊಟ್ಟೆಯಲ್ಲಿ ಮಲಗಿರುವ ಚಂದಮಾಮನ ಕೆನ್ನೆಗಳ ಮೇಲಿಂದ ಗುಲಾಬಿ ಬಣ್ಣವನ್ನು..,
ಕೆರೆಗಳಲ್ಲಿಯೂ, ತೊರೆಗಳಲ್ಲಿಯೂ, ನದಿಗಳಲ್ಲಿಯೂ ನೀರಿನ ಕೆನ್ನೆಗಳನ್ನು ತಾಕುತ್ತಾ ವಯ್ಯಾರದಿಂದ ಸಾಗಿ ಹೋಗುವ, ಮೀನಿನ ಮರಿಗಳ ಕಣ್ಣಿನಿಂದ ನೀಲಿ ಬಣ್ಣವನ್ನೂ ..,
ಬೆರಳ ತುದಿಗಳ ಮೇಲೆ ನಿಂತು ಎರಡು ನಕ್ಷತ್ರಗಳು ಮುತ್ತಿಡುವ ವೇಳೆಯಲ್ಲಿ ಚೆದುರಿದ ಕತ್ತಲಿನ ಕಪ್ಪನ್ನೂ ...,
ರಂಗೋಲಿಗೆ ಅರಿಶಿನ ಕುಂಕುಮವನ್ನದ್ದಿದ ಸೇವಂತಿಗೆಯ ಕೆನ್ನೆಗಳ ಕೆಂಪನ್ನು ಸೂರ್ಯನಿಗಿಂತ ಮುಂಚೆಯೇ ನೋಡಿ ಹಿಡಿದುಕೊಂಡು, ಅದರಿಂದ ಕೆಂಪು ಹಳದಿಯನ್ನೂ ತೆಗೆದುಕೊಳ್ಳುವ ನನ್ನ ಕಾವ್ಯ ಕುಸುಮದ ಮಂಜರಿ..... ನನ್ನ ಹ್ರದಯದಲ್ಲಿ ನನಗೇ ಗೋಚರಿಸುವ ಮಿಂಚು...
ಆದರೂ ಕೂಡ ಇಡೀ ರಾತ್ರಿಯಲ್ಲ ಜಾರಿಬಿದ್ದ ಮಲ್ಲಿಗೆಯ ಹೂಗಳನ್ನು ಅದರ ಗಂಧವನ್ನು ಬೆಳಗ್ಗಿನ ಜಾವ ಒಂದೇ ಬಾರಿ ಆಸ್ವಾದಿಸಬೇಕೆಂದರೆ ಕಷ್ಟ ತಾನೇ? ....
- ರಾಘವ

No comments:

Post a Comment