ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, May 28, 2010

ತಲೆಯೆತ್ತಿ ಆಕಾಶದೆತ್ತರಕ್ಕೆ ಕಣ್ಣು ಹಾಯುವವರೆಗೆ ನೋಡಿದರೂ ಬದುಕಿನ ಅಥಱ ನಿಲುಕುವುದಿಲ್ಲ.
ಬದುಕು ಅಂದರೆ ಇದೇ ಅಂತ ಯಾವುದನ್ನೂ ಹೇಳುವುದಕ್ಕೆ ಬರುವುದಿಲ್ಲ.
because ಪ್ರಪಂಚದ ಪ್ರತಿಯೊಬ್ಬನೂ ಕೂಡಾ
ಅವನ ಅನುಭವದ ಮೇರೆಗೆ ಬದುಕನ್ನು ಸೆರೆಹಿಡಿಯುತ್ತಾನೆ.
ನಮ್ಮ ಬದುಕಿನ ಪದವನ್ನು ಮಾತ್ರ ನಾವೇ ಜೋಡಿಸಬೇಕು......
ಸಂತಸದ ಛಾಯೆ ಬರುವ ಹಾಗೆ.......
ನಮ್ಮ ಬದುಕಿನ ನಡುವೆ ಆಗುಹೋಗುಗಳು ಹೇಗೇ ಬಂದ್ರೂ ನಾವು ಹೇಗೆ ಸ್ವೀಕರಿಸುತ್ತೇವೆಯೋ ಹಾಗೆ ಅದು ನಮ್ಮ ಪಾಲಿಗೆ ಬದಲಾಗುತ್ತವೆ.
ನೋವುಗಳು ದುಃಖಗಳು ಮನುಷ್ಯನಿಗೆ ಶಾಶ್ವತವಲ್ಲ..
ವಿಷಯ ಏನೆಂದರೆ ನೋವುಗಳು ದುಃಖಗಳು ಸಣ್ಣ ಪುಟ್ಟ ಬೇಸರಗಳು ಇಲ್ಲದೇ ಹೋದರೆ ಬದುಕಿನಲ್ಲಿ ಸಂತಸದ ಉನ್ಮಾದ ಹೇಗಿರುತ್ತದೆಯೆಂಬುದನ್ನು ನಾವು ಅರಿಯಲಿಕ್ಕೇ ಸಾಧ್ಯವಾಗುತ್ತಿರಲಿಲ್ಲವೇನೋ....
ಮನುಷ್ಯ ಎಷ್ಟು ಹೆಚ್ಚು ನೋವು ಅನುಭವಿಸುತ್ತಾನೋ ಅಷ್ಟು ಹೆಚ್ಚು ಸುಖವನ್ನು ಕೂಡಾ..... ಅನುಭವಿಸುತ್ತಾನೆ.


Friday, May 21, 2010

ಗೆಳತಿ.... ಇದೊಂದು ಘಳಿಗೆ ಅತ್ತು ಬಿಡುವೆ...... ಕೊನೆಯ ಕಂಬನಿ ಬಿತ್ತಿ ಬಿಡುವೆ......




ಸ್ರಷ್ಟಿಯಲ್ಲಿ ಸಿಹಿಯಾದುದು ಸ್ನೇಹ. ಅಮ್ಮನ ಕೈ ತುತ್ತು ತಿನ್ನದ ಹೊರತು ಮಕ್ಕಳಿಗೆ ಹೊಟ್ಟೆ ತುಂಬುವುದಿಲ್ಲ. ಹಾಗೇ ಪ್ರತಿಯೊಬ್ಬ ಮನುಷ್ಯನಿಗೆ ಒಬ್ಬ ಒಳ್ಳೆ ಸ್ನೇಹಿ ಇರಬೇಕು. ಅಪ್ಯಾಯತೆಯನ್ನೂ, ಪ್ರೀತಿಯನ್ನೂ, ನೋವನ್ನೂ, ಸಂತಸವನ್ನೂ, ಹಂಚಿಕೊಳ್ಳಬೇಕು. ನಿನ್ನ ಸ್ನೆಹದಲ್ಲಿ ಸ್ವಚ್ಛತೆಯಿದೆ.. ನಿಜವಿದೆ.. ಅಮಾಯಕತೆಯಿದೆ..
Love is truth...... Love is eternal

ಉಸಿರು ಒಳಬರುತ್ತಿರುವಾಗ ನೀನು ನನ್ನೊಳಗೇ ಪ್ರವೇಶಿಸುತ್ತಿರುವ ಅನುಭವವಾಗಿ ಉದರ ಉಕ್ಕುತ್ತದೆ. ಶ್ವಾಸ ಹೊರಹೋಗುತ್ತಿದ್ದರೆ ನೀನು ನನ್ನನ್ನೇ ತೊರೆದು ಹೊರಟು ಹೋಗುತ್ತಿದ್ದೀಯಾ ಅನ್ನೋ ನೋವಿನಿಂದ ಹೊಟ್ಟೆ ನುಲಿಯುತ್ತದೆ. ಈ ಉಛ್ವಾಸ ನಿಶ್ವಾಸದಲ್ಲಿ ಕೂಡಾ ನೀನೇ ತುಂಬಿರುವೆ ಎನ್ನೋ ಆನಂದದಿಂದ ಗುಂಡಿಗೆ ತುಂಬಿ ಹೋಗುತ್ತದೆ.

ಇನ್ನು ಮೂರೇ ಮೂರು ದಿನ ಗೆಳತೀ.... ನೀನು ಹೊರಟು ಹೋಗುತ್ತೀಯಾ.....
ಯಾಚಿಸುವ ಹ್ರದಯವ ಬಿಟ್ಟು ದೂರ ದೂರ....
ಕನಸುಗಳ ಮೂಟೆಗಳನ್ನು.. ನೆನಪುಗಳ ಪುಟಗಳನ್ನು ನನ್ನ ಜೊತೆ ಬಿಟ್ಟು...
ಮುದುಡಿಕೊಂಡ ಬಯಕೆಗಳ ಪದರಗಳನ್ನು ಬಿಚ್ಚಿದರೆ.........
ಗುಲಾಬಿ ಕುಸುಮಗಳಂತೆ ಜಾರಿ ಹೋಗುತ್ತಿರುವ ಕನಸುಗಳನ್ನು ಆರಿಸಿಕೊಳ್ಳಲು ಬಾಗುತ್ತಿದ್ದರೆ....
ಸದೂರ ತೀರದಲ್ಲೆಲ್ಲೋ ನೀನು ನಿಂತು ನಕ್ಕ ಹಾಗೆ....
ಜಲತರಂಗಿಣಿ ವಾದ್ಯದಂತೆ ಇದ್ದ ಆ ಮಂದಹಾಸದ ಪ್ರಕಂಪನ ಜೀವನದ ನಿಘಂಟುವಿನಲ್ಲಿ ಪ್ರೀತಿಯ ಪದವನ್ನು ತೋರಿಸಿದ ಹಾಗೆ....

"ನೀನು ಚನ್ನಾಗಿರ್ತೀಯಾ ಬಿಡು" ಅನ್ನೋ ಮಾತು "ಏ ನಿನ್ನನ್ನು ಮರಿತೀನೇನೋ ನಾನು" ಅನ್ನೋ ಮಾತಿನಲ್ಲಿ ಯಾವ ಭಾವವಿತ್ತೋ ನಂಗೊತ್ತಿಲ್ಲ ಕಣೇ.... ಆದರೆ....
ಇಡೀ ಜೀವನದ ಗ್ರಂಥದಲ್ಲಿ ನನಗೆ ಕಾಣದಿದ್ದ ಪದವನ್ನು ನೀನು ಕೊನೆಯ ಪುಟದಲ್ಲಿ ತೋರಿಸಿದೆಯಲ್ಲಾ..... Thanks...

ಎಲ್ಲೋ ಗುರು ಹೇಳಿದ ನೆನಪು....
"ಜೀವನ- ಪ್ರವಾಹದಲ್ಲಿ ತೇಲುತ್ತಾ ಮುಳುಗುತ್ತಾ ಹೋಗುವ ತೆಂಗಿನಕಾಯಿ ಮೂಟೆಯಾಗಿರುವಾಗ...
ಸಂತೋಷ- ಪುಸ್ತಕದಲ್ಲಿ ಬಚ್ಚಿಟ್ಟುಕೊಂಡ ನವಿಲುಗರಿಯಾಗಿರುವಾಗ....
ಆತಱಗೀತಾಲಾಪನೆಯೊಂದಿಗೆ- ಆರು ಋತುಗಳೂ ಗ್ರೀಷ್ಮವಾಗಿರುವಾಗ.....
ಬದುಕುವದಕ್ಕಾಗಿ ನಾವು ಪ್ರತೀ ಕ್ಷಣ ಸಾಯಬೇಕಾಗಿ ಬಂದಾಗ........
ಓ ಗಂಗಾಧರಾ.... ಓ ವಿಶ್ವಂಭರಾ.....!!
ನನ್ನ ಆನಂದದ ಸಾಗರದಲ್ಲಿ ನೀರು ಹೇಗೂ ಇಲ್ಲಾ....
ಅಳುವುದಕ್ಕಾದರೂ ನನ್ನ ಕಣ್ಣುಗಳಲ್ಲಿ ನೀರು ಕೊಡು..

ವಿಷಾದವಾಗುವ ಪ್ರತೀ ಸೂಯಾಱಸ್ಥವೂ ಜೀವನದ ಡೈರಿಯಲ್ಲಿ ಒಂದು ಕೊಟೇಷನ್ನೇ...... ನಿಜ.
ಸಹಿಸಿಕೊಂಡು.. ತಾಳಿಕೊಂಡು.. ಹೊಸ ಬರುವಿಕೆಗೆ ಕಾಯುತ್ತಾ ಸಾಗಬೇಕು.. ಅದೂ ನಿಜ....
ಆದರೆ .. ತಡೆಯಬೇಡ ಗೆಳತಿ ಪ್ಲೀಸ್......
ಇದೊಂದು ಘಳಿಗೆ ಅತ್ತು ಬಿಡುವೆ......
ನನ್ನ ಕೊನೆಯ ಕಂಬನಿ ಇದು..

Sunday, May 16, 2010

ನನ್ನವಳಿಗೆ.....












ಏನೂ ಗೊತ್ತಾಗ್ತಾ ಇಲ್ಲಾ...... ಏನೂಂದ್ರೆ ಏನೂ ಗೊತ್ತಾಗ್ತಾ ಇಲ್ಲಾ .. ನನ್ನ ಕೊನೆಯ exam ನಲ್ಲಾದ್ರೂ ಇಷ್ಟು ಚನ್ನಾಗಿ ಪೇಪರ್ ಹಾಗೂ ಪೆನ್ನನ್ನು ರೆಡಿ ಮಾಡಿಕೊಂಡು ಬಂದು ಬರೆಯಲು ಕುಂತಿಲ್ಲಾ.... ಅಂಥಾದ್ದರಲ್ಲಿ ನಿನಗಾಗಿ.............
ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹ್ರದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ


You are lucky ಕಣೇ.... ಹಾಗಂತ ನೀನು ತಿಳ್ಕೊಂಡ್ರೆ I am very lucky. ನಿಂಗೊತ್ತಾ ಕಾಲೇಜ್ ಗೆ ನೀನು 1'st day ನೀನು enter ಆದ ದಿನ ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ..... ಸುಮಾಳಿದು. She is real beauty ಅಂತ ಅದೆಷ್ಟು ಜನರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ.... ನೀನೇನೂ ನನ್ನನ್ನೇ ಅಂತಾ ನೋಡಿಲ್ಲಾ ನಿಜ... ಸಹಜವಾಗಿ ನೋಡಿದರೂ ನನ್ ಮನಸು ಅದನ್ನ ಒಪ್ಪಿಕೊಳ್ಳೋಕೆ ತಯಾರಿಲ್ಲಾ.. ಇನ್ನೂ ನನಗಥಱವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು ಕುಳಿತುಬಿಟ್ಟೆಯಾ ಅಂತ......?

ಮೊದಲ ದಿನದಿಂದ್ಲೇ ನಿನ್ನನ್ನು ನೋಡ್ತಿದೀನಿ ಕಣೇ... ಗುಂಪಿನಲ್ಲಿ ಗೋವಿಂದ ಆಗ್ಬೇಕು ಅಂದ್ಕೋತೀಯಾ... ಆದರೆ ಕೋಹಿನೋರ್ ವಜ್ರದಂತಹ ಹೊಳೆವ ಕಳ್ಳಿ ನೀನು.. ಹ್ರದಯ ಕದ್ದು ತನಗೆ ಗೊತ್ತೇ ಇಲ್ಲಾ ಅನ್ನೋ ಥರಾ ಹೋಗ್ತಿರ್ತೀಯಾ... ನನ್ ಕಣ್ಣನ್ನು ಮಾತ್ರ ತಪ್ಪಿಸಿಕೊಂಡು ಹೋಗೋಕೆ ಆಗ್ಲೇ ಇಲ್ವಲ್ಲೇ......


ನೀನು ಎದುರಾದಾಗಲಲ್ಲೆಲ್ಲಾ... "ಕಳ್ಳಿ ನೀನು ಹ್ರದಯ ಕದ್ದಿದೀಯಾ" ಅನ್ಬೇಕು ಅಂದ್ಕೋತೀನಿ... ಇನ್ನೂ ವರೆಗೂ ಆಗ್ಲೇ ಇಲ್ಲಾ. ನನ್ನ ಹ್ರದಯವನ್ನು ನನಗೆ ಕೊಡ್ತೀಯೇನೋ ಅಂತಾ ಕಾಯ್ತಾನೇ ಇದೀನಿ.. ಕೊಟ್ಟಿಲ್ಲಾ ನೀನು... ಕೊಡೋಲ್ಲಾ ನೀನು ಪಾಪಿ.. ಕೊನೇ ಪಕ್ಷ "ಮರಳಿ ಕೊಡೋದಿಕ್ಕಾ ಹುಡುಗಾ ಕದ್ದಿದ್ದು" ಅಂತಾದ್ರೂ ಒಂದ್ಮಾತು ಹೇಳ್ಬಹುದಿತ್ತಲ್ಲಾ.... ಯಾಕೇ ಕಾಡಿಸ್ತೀಯಾ?..

ಆವತ್ತೊಂದು ದಿನ ಆ ಪುಡಿ ಬಣ್ಣದ ಪುಟ್ಟ ಚೂಡಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ನಡೆದು ಬಂದು ಅದೆಷ್ಟು ಮಧು ಮಧುರವಾಗಿ ದಿಟ್ಟಿಸಿದ್ದೆ.... ಆ ಚುಡಿಯ ಹೊಳೆವ ಝರಿಯಂಚು ನಿನ್ನ ಗೆಜ್ಜೆಗೆ ಸಿಕ್ಕಿ ನೀನು ಎಡವಿದಂತಾದಾಗ ನನಗೇ ಅರಿವಿಲ್ಲದಂತೆ ಎರಡೆಜ್ಜೆ ಮುಂದೆ ಬಂದು "ಏಯ್" ಅಂದಿದ್ದೆನಲ್ಲಾ.. ನೆನಪಿದ್ಯಾ? ಅದನ್ನು ಎಷ್ಟು ಚುರುಕಾಗಿ ಗಮನಿಸಿ ಮುಗುಳು ನಕ್ಕಿದ್ದೆಯಲ್ಲಾ..... ನನ್ನೆದೆಯನ್ನು ನಗಾರಿ ಮಾಡಿಸಿ.... ಪಾಪಿ... ಯಾಕೇ ಗೊತ್ತಾಗಿಲ್ಲಾ ನಿಂಗೆ ಇದು ಪ್ರೀತಿ ಅಂತಾ...

ಹೀಗೇ ದಿನಂ ಪ್ರತಿ ಏನೇನೋ ತೊಳಲಾಟಗಳ ನಡುವೆಯಲ್ಲೆಲ್ಲೋ ಅಂದ್ಕೊಂಡ್ಬಿಟ್ಟಿದೀನಿ.. ಇದು ಪ್ರೀತಿ ಅಂತಾ.... ಧೈಯಱ ಮಾಡಿ ಚಂದ ಚಂದಾಗಿ ಒಂದು ಪ್ರೇಮ ಪತ್ರ ಬರೆದು ಬಿಟ್ಟೆನಲ್ಲಾ.ಎಷ್ಟು ಕಸರತ್ತಿನಿಂದ.. ಬೆಳೆಗೆರೆ ಸಾಹಿತ್ಯ ಶೈಲಿ... ಭೈರಪ್ಪರ ತುಂಟು ಕಲ್ಪನೆ.... k.s. ರ ಪ್ರೇಮ ಕಾವ್ಯ ಧಾರೆ... ಎಲ್ಲಾ ಸೇರಿಸಿ ನಿನಗಾಗಿ ಒಂದು ಪ್ರೇಮ ಲಕೋಟೆ ಸಿದ್ದಪಡಿಸಿಬಿಟ್ಟೆನಲ್ಲಾ... ತಾಜಮಹಲಿನಷ್ಟು ಪ್ರೀತಿಯಿಂದ....

ಬೆಚ್ಚಗೆ ಪ್ರೀತಿಯಿಂದ ಲಕೋಟೆಯೊಳಗೆ ಮಡಿಸಿಟ್ಟ ಆ ಪತ್ರಾನಾ ನಿನ್ನ ಮಡಿಲಿಗೆ ಹಾಕಬೇಕಂತಾ ಆವತ್ತು exam ನ ಕೊನೆಯ ದಿನ ಎಷ್ಟೊತ್ತಿನಿಂದ ಕಾದು ಕುಳಿತಿದ್ದೆ ಗೊತ್ತಾ... ಕೊನೆಗೂ ನೀ ಒಬ್ಳೇ ಬಂದುಬಿಟ್ಟೆ... ನಿನಗೆ ಕೊಡಬೇಕೂಂತ ಅಂದುಕೊಳ್ಳುವಷ್ಟರಲ್ಲೇ ಕೈ ನಡುಗಿ... ಧೈಯಱ ಉಡುಗಿ... ಮಾತು ತೊದಲಿ... best of luck ಅಂತ ಮಾತ್ರ ಹೇಳಿ ವಾಪಸ್ ಬಂದುಬಿಟ್ಟೆನಲ್ಲಾ....
ಅಂದು ಕೈ ಜಾರಿದವಳು ನೀನು ಇನ್ನೂ ಸಿಕ್ಕೇ ಇಲ್ವಲ್ಲೇ.....
ನನ್ನ ಮನದ ಜಾತ್ರೆಯಲಿ ಸುಳಿದ ಜಾಜಿ ಕಣೇ ನೀನು....
ಒಂದು ಬಾರಿ ಬಂದುಬಿಡು ಚಿನ್ನಾ...
ಓಲೆ ಕೈಲಿಡಿದು ಕಾಯುತ್ತಿದ್ದೇನೆ......
ಹ್ರದಯ ತುಂಬೆಲ್ಲಾ ಕನಸ ಹೊತ್ತು.....
-------> ನಾನು ನಿನ್ನವನು.

Saturday, May 15, 2010

ಆಡಿಸುವಾತ ಬೇಸರ ಮೂಡಿ.....















ಬದುಕಿದರೆ ಬದುಕಬೇಕು ನೋವುಗಳೇ ಇಲ್ಲಾ ಅನ್ನೋ ಹಾಗೇ.......

--------------------------> ನಗೆಯ ಕಣ್ಣೀರಿನಲ್ಲಿ...............
ನಕ್ಕರೆ ನಗಬೇಕು ಹಿಂದೆಂದೂ ನಗಲೇ ಇಲ್ಲಾ ಅನ್ನೋ ಹಾಗೆ.........
--------------------------> ಹೊಟ್ಟೆ ಹುಣ್ಣಾಗುವವರೆಗೆ.........
ಪ್ರೀತಿಸಬೇಕು.....
ಸ್ನೇಹಿಸಬೇಕು....
ನಲಿಯಬೇಕು....
ನಲಿಸಬೇಕು.....
ಹಾಡಬೇಕು....
ಓಡಬೇಕು.....
ನಮಗೆ ನಾಳೆಗಳೇ ಇಲ್ಲಾ ಅನ್ನೋ ಹಾಗೆ....
ನಮ್ಮೋಂದಿಗೆ ಬದುಕಿಗೊಂದು ಬಾಂಧವ್ಯ ಬೆಳೆಯಬೇಕು....
ನಮ್ಮ ನಂತರವೂ ನಮ್ಮದೊಂದು ಛಾಯೆ ಉಳಿಯಬೇಕು...
........................................
................

ಬದುಕಿದರೆ ಬದುಕಬೇಕು ಆಡಿಸುವಾತನಿಗೆ
---------------------> ಬೇಸರ ಮೂಡದ ಹಾಗೆ..
ಆಟ ಮುಗಿಸಿದರೂ ಒಮ್ಮೆ ಮತ್ತೊಮ್ಮೆ.................
---------------------> ನೆನಪು ಕಾಡುವ ಹಾಗೆ...
---------------------> ಕನಸು ಮೂಡುವ ಹಾಗೆ.

********ರಾಘವ್..*******

Saturday, May 8, 2010

ಭಾವನೆಯೊಂದಿಗೆ......ಮುಸ್ಸಂಜೆಯ ಮಾತು....


ಒಂದು ಸುಂದರ ಮುಸ್ಸಂಜೆಯಲ್ಲಿ ನವಿರಾಗಿ ನಮ್ಮ ಮನಸಿನೊಂದಿಗೆ ಕನಸಿನೊಂದಿಗೆ ಭಾವನೆಗಳೊಂದಿಗೆ ನಮ್ಮೊಳಗೆ ನಾವೇ ಮಾತಾಗುವ ಬಯಕೆ..........

ಬಾನಿನ ಕೆಂಪು ಕೆಂಪು ಚಿತ್ತಾರದಲ್ಲಿ ಮಿಂದು ಬಾನೊಂದಿಗಿನ ಒಂದು ತುಂಡಾಗುವ ಬಯಕೆ........

ಬೆಳ್ಳಂಬೆಳಗಿನಿಂದ ಸಂಜೆ ಮುಸ್ಸಂಜೆಯವರೆಗೆ ಮಾಯ ಮಾಂತ್ರಿಕದಲ್ಲಿ ಬೆಂದ ಕೆಂಪು ಕೆಂಪಾದ ರವಿಯನ್ನಾ ಬೆಡ್ ಲ್ಯಾಂಪನ್ನಾಗಿರಿಸಿಕೊಳ್ಳೋ ಬಯಕೆ....
ದಿನದೊಂದಿಗಿನ ತಮ್ಮ ವ್ಯವಹಾರವನ್ನು ಮುಗಿಸಿ ಮನೆ ಮಡಿಲಲ್ಲೊಂದಾಗುವ ತವಕದಲ್ಲಿ ರವಿಯ ಮೂತಿಯ ಮುಂದೆಯೇ ಹಾರಿ ಹೋಗುವ ಹಕ್ಕಿ ಸಾಲುಗಳಲ್ಲಿ ಒಂದಾಗಿ ಕಾಣದ ತೀರಕ್ಕೆ ಹಾರಿ ಹೋಗುವ ಬಯಕೆ......