ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Sunday, May 16, 2010

ನನ್ನವಳಿಗೆ.....












ಏನೂ ಗೊತ್ತಾಗ್ತಾ ಇಲ್ಲಾ...... ಏನೂಂದ್ರೆ ಏನೂ ಗೊತ್ತಾಗ್ತಾ ಇಲ್ಲಾ .. ನನ್ನ ಕೊನೆಯ exam ನಲ್ಲಾದ್ರೂ ಇಷ್ಟು ಚನ್ನಾಗಿ ಪೇಪರ್ ಹಾಗೂ ಪೆನ್ನನ್ನು ರೆಡಿ ಮಾಡಿಕೊಂಡು ಬಂದು ಬರೆಯಲು ಕುಂತಿಲ್ಲಾ.... ಅಂಥಾದ್ದರಲ್ಲಿ ನಿನಗಾಗಿ.............
ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹ್ರದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ


You are lucky ಕಣೇ.... ಹಾಗಂತ ನೀನು ತಿಳ್ಕೊಂಡ್ರೆ I am very lucky. ನಿಂಗೊತ್ತಾ ಕಾಲೇಜ್ ಗೆ ನೀನು 1'st day ನೀನು enter ಆದ ದಿನ ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ..... ಸುಮಾಳಿದು. She is real beauty ಅಂತ ಅದೆಷ್ಟು ಜನರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ.... ನೀನೇನೂ ನನ್ನನ್ನೇ ಅಂತಾ ನೋಡಿಲ್ಲಾ ನಿಜ... ಸಹಜವಾಗಿ ನೋಡಿದರೂ ನನ್ ಮನಸು ಅದನ್ನ ಒಪ್ಪಿಕೊಳ್ಳೋಕೆ ತಯಾರಿಲ್ಲಾ.. ಇನ್ನೂ ನನಗಥಱವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು ಕುಳಿತುಬಿಟ್ಟೆಯಾ ಅಂತ......?

ಮೊದಲ ದಿನದಿಂದ್ಲೇ ನಿನ್ನನ್ನು ನೋಡ್ತಿದೀನಿ ಕಣೇ... ಗುಂಪಿನಲ್ಲಿ ಗೋವಿಂದ ಆಗ್ಬೇಕು ಅಂದ್ಕೋತೀಯಾ... ಆದರೆ ಕೋಹಿನೋರ್ ವಜ್ರದಂತಹ ಹೊಳೆವ ಕಳ್ಳಿ ನೀನು.. ಹ್ರದಯ ಕದ್ದು ತನಗೆ ಗೊತ್ತೇ ಇಲ್ಲಾ ಅನ್ನೋ ಥರಾ ಹೋಗ್ತಿರ್ತೀಯಾ... ನನ್ ಕಣ್ಣನ್ನು ಮಾತ್ರ ತಪ್ಪಿಸಿಕೊಂಡು ಹೋಗೋಕೆ ಆಗ್ಲೇ ಇಲ್ವಲ್ಲೇ......


ನೀನು ಎದುರಾದಾಗಲಲ್ಲೆಲ್ಲಾ... "ಕಳ್ಳಿ ನೀನು ಹ್ರದಯ ಕದ್ದಿದೀಯಾ" ಅನ್ಬೇಕು ಅಂದ್ಕೋತೀನಿ... ಇನ್ನೂ ವರೆಗೂ ಆಗ್ಲೇ ಇಲ್ಲಾ. ನನ್ನ ಹ್ರದಯವನ್ನು ನನಗೆ ಕೊಡ್ತೀಯೇನೋ ಅಂತಾ ಕಾಯ್ತಾನೇ ಇದೀನಿ.. ಕೊಟ್ಟಿಲ್ಲಾ ನೀನು... ಕೊಡೋಲ್ಲಾ ನೀನು ಪಾಪಿ.. ಕೊನೇ ಪಕ್ಷ "ಮರಳಿ ಕೊಡೋದಿಕ್ಕಾ ಹುಡುಗಾ ಕದ್ದಿದ್ದು" ಅಂತಾದ್ರೂ ಒಂದ್ಮಾತು ಹೇಳ್ಬಹುದಿತ್ತಲ್ಲಾ.... ಯಾಕೇ ಕಾಡಿಸ್ತೀಯಾ?..

ಆವತ್ತೊಂದು ದಿನ ಆ ಪುಡಿ ಬಣ್ಣದ ಪುಟ್ಟ ಚೂಡಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ನಡೆದು ಬಂದು ಅದೆಷ್ಟು ಮಧು ಮಧುರವಾಗಿ ದಿಟ್ಟಿಸಿದ್ದೆ.... ಆ ಚುಡಿಯ ಹೊಳೆವ ಝರಿಯಂಚು ನಿನ್ನ ಗೆಜ್ಜೆಗೆ ಸಿಕ್ಕಿ ನೀನು ಎಡವಿದಂತಾದಾಗ ನನಗೇ ಅರಿವಿಲ್ಲದಂತೆ ಎರಡೆಜ್ಜೆ ಮುಂದೆ ಬಂದು "ಏಯ್" ಅಂದಿದ್ದೆನಲ್ಲಾ.. ನೆನಪಿದ್ಯಾ? ಅದನ್ನು ಎಷ್ಟು ಚುರುಕಾಗಿ ಗಮನಿಸಿ ಮುಗುಳು ನಕ್ಕಿದ್ದೆಯಲ್ಲಾ..... ನನ್ನೆದೆಯನ್ನು ನಗಾರಿ ಮಾಡಿಸಿ.... ಪಾಪಿ... ಯಾಕೇ ಗೊತ್ತಾಗಿಲ್ಲಾ ನಿಂಗೆ ಇದು ಪ್ರೀತಿ ಅಂತಾ...

ಹೀಗೇ ದಿನಂ ಪ್ರತಿ ಏನೇನೋ ತೊಳಲಾಟಗಳ ನಡುವೆಯಲ್ಲೆಲ್ಲೋ ಅಂದ್ಕೊಂಡ್ಬಿಟ್ಟಿದೀನಿ.. ಇದು ಪ್ರೀತಿ ಅಂತಾ.... ಧೈಯಱ ಮಾಡಿ ಚಂದ ಚಂದಾಗಿ ಒಂದು ಪ್ರೇಮ ಪತ್ರ ಬರೆದು ಬಿಟ್ಟೆನಲ್ಲಾ.ಎಷ್ಟು ಕಸರತ್ತಿನಿಂದ.. ಬೆಳೆಗೆರೆ ಸಾಹಿತ್ಯ ಶೈಲಿ... ಭೈರಪ್ಪರ ತುಂಟು ಕಲ್ಪನೆ.... k.s. ರ ಪ್ರೇಮ ಕಾವ್ಯ ಧಾರೆ... ಎಲ್ಲಾ ಸೇರಿಸಿ ನಿನಗಾಗಿ ಒಂದು ಪ್ರೇಮ ಲಕೋಟೆ ಸಿದ್ದಪಡಿಸಿಬಿಟ್ಟೆನಲ್ಲಾ... ತಾಜಮಹಲಿನಷ್ಟು ಪ್ರೀತಿಯಿಂದ....

ಬೆಚ್ಚಗೆ ಪ್ರೀತಿಯಿಂದ ಲಕೋಟೆಯೊಳಗೆ ಮಡಿಸಿಟ್ಟ ಆ ಪತ್ರಾನಾ ನಿನ್ನ ಮಡಿಲಿಗೆ ಹಾಕಬೇಕಂತಾ ಆವತ್ತು exam ನ ಕೊನೆಯ ದಿನ ಎಷ್ಟೊತ್ತಿನಿಂದ ಕಾದು ಕುಳಿತಿದ್ದೆ ಗೊತ್ತಾ... ಕೊನೆಗೂ ನೀ ಒಬ್ಳೇ ಬಂದುಬಿಟ್ಟೆ... ನಿನಗೆ ಕೊಡಬೇಕೂಂತ ಅಂದುಕೊಳ್ಳುವಷ್ಟರಲ್ಲೇ ಕೈ ನಡುಗಿ... ಧೈಯಱ ಉಡುಗಿ... ಮಾತು ತೊದಲಿ... best of luck ಅಂತ ಮಾತ್ರ ಹೇಳಿ ವಾಪಸ್ ಬಂದುಬಿಟ್ಟೆನಲ್ಲಾ....
ಅಂದು ಕೈ ಜಾರಿದವಳು ನೀನು ಇನ್ನೂ ಸಿಕ್ಕೇ ಇಲ್ವಲ್ಲೇ.....
ನನ್ನ ಮನದ ಜಾತ್ರೆಯಲಿ ಸುಳಿದ ಜಾಜಿ ಕಣೇ ನೀನು....
ಒಂದು ಬಾರಿ ಬಂದುಬಿಡು ಚಿನ್ನಾ...
ಓಲೆ ಕೈಲಿಡಿದು ಕಾಯುತ್ತಿದ್ದೇನೆ......
ಹ್ರದಯ ತುಂಬೆಲ್ಲಾ ಕನಸ ಹೊತ್ತು.....
-------> ನಾನು ನಿನ್ನವನು.

No comments:

Post a Comment