ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, June 3, 2010

ಕದ್ದ ಸಾಲುಗಳ ಶುದ್ಧ ಭಾವ.....[ಪಾಪುಮರೀ ಇದು ನಿನಗೋಸ್ಕರ]

ಅವನು ಆತ್ಮಬಂಧು......
ಮಾತಿಗೊಮ್ಮೆ ಅವಳ ಮೈ ಕೈ ಮುಟ್ಟುವುದಿಲ್ಲ. ತಾಕಿ ಕೊಳೆ ಮಾಡಲ್ಲ. ಹಸಿದವನಂತೆ ಸದಾ ಆಕೆಯ ಸುತ್ತ ಪಹ
ರೆ ಸುತ್ತಲ್ಲ. ನಂಗೊತ್ತು ಅವಳನ್ನು ತುಂಬಾ ಇಷ್ಟ ಪಡ್ತಾನೆ. ಆದರೆ ಅವಳ ಮೈಯನ್ನಲ್ಲ. ತುಂಬಾ ಪ್ರೀತಿಸ್ತಾನೆ ಆದ್ರೆ ಸಂಬಂಧಕ್ಕೊಂದು ಹೆಸರಿಡಲ್ಲ. ಆಪತ್ತು ಬಂದಾಗ ಸಹಾಯಕ್ಕೆ ನಿಲ್ಲುತ್ತಾನೆ.ಸಂಭ್ರಮದ ಕ್ಷಣಗಳಲ್ಲಿ ತಕ್ಷಣ ನೆನಪಾಗುತ್ತಾನೆ. ಯಾಕೋ ಯಾವುದೂ ಬೇಡವೆನಿಸಿದಾಗ ಒಬ್ಬಳನ್ನೇ ತನ್ನ ಪಾಡಿಗೆ ತಾನು ಇರಲು ಬಿಟ್ಟುಬಿಡುತ್ತಾನೆ. ಆಜೆಯ ಕಷ್ಟ ಸುಖಗಳನ್ನು ಕೇಳುತ್ತಾನೆ. ತನ್ನ ನಲಿವುಗಳನ್ನು ಹಂಚಿಕೊಳ್ಳುತ್ತಾನೆ. ಅವನು ಗಂಡನಲ್ಲ,ಪ್ರಿಯಕರನಲ್ಲ,ಸವಕಲಾಗಿ ಹೋಗಿರುವ ಶಬ್ಧ "Best Friend" ಅಂತೀವಲ್ಲ ಅದೂ ಅಲ್ಲ.
ಅವ
ರಿಬ್ಬರ ಸಂಬಂಧಕ್ಕೆ ಇಂಥವೇ ಅಂಥ ಒಂದು ಹೆಸರಿಲ್ಲ. ಯಾವತ್ತೋ ಒಂದು ದಿನ ಆಕೆಯನ್ನು ಪಡೆದೇ ತೀರಬೇಕು ಅನ್ನೋ ಧಾವಂತವಿಲ್ಲ. ಅವಳು ಸ್ವೀಕರಿಸದಿದ್ದರೆ ಏನಾದೀತು ಅನ್ನೋ ಆತಂಕವಿಲ್ಲ. ಆದರೂ ಸಹ ಯಾವತ್ತೂ ಜೊತೆಯಾಗಿರುವ ಭರವಸೆ ಕೊಡುತ್ತಾನೆ. ನೊಂದ ಜೀವಕ್ಕೆ ಕೊಂಚ ಮಟ್ಟಿಗಾದರೂ ಸಾಂತ್ವನ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡ್ತಾನೆ.....
ಅವನೇ ನಿಜವಾದ ಆತ್ಮಬಂಧು.....

1 comment:

  1. anna....tumba tumba tumba chennagiddu..i like it very much.nice article. keep on writing..

    ReplyDelete