ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, July 1, 2010

ಎಲ್ಲಿಂದೆಲ್ಲಿಗೋ.......

ಯಾವ ಕುಂಕುಮ ಬಿಂದು
ಯಾರ ಹಣೆ ಬೆಳಗುವುದೋ
ಯಾವ ವಿಧವೆಯ ಬಾಳ
ಅರಳಿಸುವುದೋ ||

ಯಾವ ನೀರಿನ ಸೆಲೆಯು
ಯಾರ ಬಾಯಾರಿಕೆಗೋ
ಯಾರ ಕಣ್ಣೀರ ಜೊತೆಗೂಡಲೆಂದೋ
ಯಾವನಾಪ್ತ ನೆಲ
ಯಾವ ವ್ರಕ್ಷಕೋ ಏನೋ
ಯಾವ ಚೈತ್ರದ ಚಿಗುರ ಬೆಳೆಸಲೆಂದೋ ||

ಯಾವ ಕೋಗಿಲೆ ಹಾಡು
ಯಾವ ಮಾಮರದಲ್ಲೋ
ಯಾರ ಕಿವಿಗೆ ಇಂಪು ಹರಿಸಲೆಂದೋ
ಯಾವ ನೀರಿನ ಆವಿ
ಯಾವ ಮುಗಿಲಿಗೋ ಏನೋ
ಯಾವ ಒಣಗಿದ ನೆಲಕೆ ಸುರಿಸಲೆಂದೋ ||

ಯಾರ ಒಲವಿನ ಪ್ರೀತಿ
ಯಾರ ಎದೆ ಬೆಳಗುವುದೋ
ಯಾವ ಒಲವಿನ ಜೋಡಿ ಕೂಡಲೆಂದೋ
ಯಾವ ಮರೆಯದ ಘಳಿಗೆ
ಯಾವ ಹ್ರದಯದ ಸುಳಿಗೆ
ಯಾರ ನೆನಪಿನ ಛಾಯೆ ಉಳಿಸಲೆಂದೋ ||

--------------------------> ರಾಘವ್.

No comments:

Post a Comment