ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, July 1, 2010

ಕರೆಯಬೇಕಿನ್ನೆಷ್ಟು ಸಾರಿ ಸಾರಿ

ಇದು ನಿನ್ನದೇ ಕನಸ
ಹೊತ್ತು ತಿರುಗಿದ ದಾರಿ
ಒಂದಲ್ಲ ಎರಡಲ್ಲ ಬಾರಿ ಬಾರಿ
ಎಷ್ಟು ಯೋಜನ ದೂರ
ನಿನ್ನ ಮನಸಿನ ದಾರಿ
ಕರೆಯಬೇಕಿನ್ನೆಷ್ಟು ಸಾರಿ ಸಾರಿ ||

ಒಲ್ಮೆಯಲಿ ಕರೆದಿರುವೆ
ಬಾಳ ಬಳಿ ಬಾರೆಂದು
ಯಾವ ಉಲಿತಕೆ ನೀನು ಕರಗೋ ಹೆಣ್ಣು
ವರುಷವಾಯಿತು ಚಿನ್ನಾ
ಪ್ರೀತಿ ಕನಸನು ಕಂಡು
ನೀ ಬರದಿರೇ ಹ್ರದಯ ಬರಿಯ ಹುಣ್ಣು ||

ಹ್ರದಯ ಮಹಲಲಿ ದಿನವು
ಹಚ್ಚಿ ಕುಳಿತಿಹೆ ದೀಪ
ಬಿಂದು ಬಿಂದುವು ಉರಿದು ಬೆಳಕ ನೀಡಿ
ನನ್ನ ಸ್ಥಿತಿಯನು ನೋಡಿ
ಅನಿಸಲಿಲ್ಲವೇ ಪಾಪ
ಒಲಿಸಿಕೊಳ್ಳಲೇ ನಿನ್ನ ಕಾಡಿ ಬೇಡಿ ||

ಹಸಿಮನಸ ಭೂಮಿಯಲಿ
ಒಂದು ಕಲೆಯೂ ಇಲ್ಲ
ಒಂದೇ ಒಂದು ನಿನ್ನ ಹೆಜ್ಜೆ ಬಿಟ್ಟು
ಈ ಪ್ರೀತಿ ಭಾಷ್ಪದಲಿ
ಒಲುಮೆ ಹನಿಗಳೇ ಎಲ್ಲ
ಬಾ ಉಓಡು ತಳವೂರು ಬೇರನಿಟ್ಟು ||

--------------------> ರಾಘವ್

No comments:

Post a Comment