ಕಡೆದಿರುವೆ ನನ್ನೊಲವೆ
ನಿನ್ನ ಈ ಮೂರ್ತಿಯನು
ಎನ್ನ ಹೃದಯಂಗಳದ
ಪ್ರೀತಿ ಕೂಡಿ.
ಹುಲುಸಾಗಿ ಬೆಳೆಸಿರುವೆ
ಈ ಪ್ರೇಮ ವೃಕ್ಷವನು
ಒಲವು ನಲಿವುಗಳೆಂಬ
ಭಕ್ಷ್ಯ ನೀಡಿ ||
ನನ್ನ ಪ್ರೀತಿಯ ಹುಡುಗಿ
ನಿನ್ನ ಮನಸನು ಅರಿವೆ
ಕಚ್ಚುವಾ ನಾಗರಕೂ
ಒಲವ ಕ್ಷೀರವ ಎರೆವೆ ||
ಗುಬ್ಬಿ ಮರಿಯನು ಕಂಡು
ಏಕಾಂಗಿ ನೀನೆಂದು
ಏಕಾಂಗಿ ನೀನೆಂದು
ಮರುಗುವಾ ಮನಸವಳೆ
ನೀ ನನ್ನ ಚಲುವೆ||
ಹುಚ್ಚು ಹುಡುಗಿಯೆ ನನ್ನ
ಕಾಲ ಕಿರುಗಾಯವೂ
ತನಗೇನೆ ಎಂಬಂತೆ
ದುಃಖವೇಕೆ?
ನಿನ್ನ ಈ ಪ್ರೀತಿಯನು
ಹೊತ್ತು ನಾ ಬಾಗಿಹೆನು
ಇಷ್ಟು ಪ್ರೀತಿಯ ಹೊರೆಸಿ
ನಡೆಸಬೇಕೆ?
******************* ರಾಘವ್
ಇಷ್ಟೆಲ್ಲಾ ಚಂದ್ ಕೂಸ್ನ ಮನ್ಸಲ್ಲಿ ಕಡದಿಟ್ಕಂಡ್ರೆ ಕಷ್ಟಿದ್ದೋ ಹುಡ್ಕುದು...
ReplyDeleteಕವನ ಚಂದ್ ಇದ್ದೋ...
ಕಚ್ಚುವಾ ನಾಗರಕೂ ಒಲವ ಕ್ಷೀರವನೆರೆವೆ..ಸೋ ನೈಸ್..
ಓದಿ ನಿಮಗೆ ಖುಷಿಯಾಗಿದ್ದರೆ
ReplyDeleteಅದೇ ನನಗೆ ಖುಷಿ.......
ರಾಘವ...
ReplyDeleteಕವನ ಚೆನ್ನಾಗಿದೆ...
ಜೈ ಹೋ.. !
ಇಟ್ಟಿಗೆ ಸಿಮೆಂಟಣ್ಣ ಧನ್ಯವಾದ....
ReplyDeleteಕವನ ಚೆನ್ನಾಗಿದೆ...
ReplyDeleteಪ್ರೋತ್ಸಾಹ ಯಾವತ್ತೂ ಇರಲಿ....
ReplyDeleteಮಸ್ತ್ ಮಸ್ತ್ ಕವನ ಬರೀದ್ಯಲೋ.... ಖುಶಿ ಆತು ಕವನ ಓದಿ.
ReplyDeleteನಾಗ್ರಾಜಣ್....
ReplyDeleteನಿಮ್ ಖುಷೀನೇ ನಮ್ ಖುಷಿನಪ್ಪಾ....
ಓದ್ತಾ ಇರು..
ಹಾಗೇ
ನನ್ blog ಗೆ ತುಂಬು ಸ್ವಾಗತ.
superb brother....
ReplyDeletethank u sis....
ReplyDelete