ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, July 13, 2011

ಅಂದು-ಇಂದು....


ಅಂದು-
ಪುಟ್ಟ ಹೊಳೆವ ಕಣ್ಣುಗಳಲ್ಲಿ
ಚಂದ ಚಂದನೆಯ
ಕನಸಿತ್ತು
ಮನಸಿನಲಿ ಕನಸ
ನನಸಾಗಿಸುವ ಛಲವಿತ್ತು..


ಅಂದು-
ನಿನ್ನ ಗೆಜ್ಜೆ ಕಟ್ಟಿದ ಕಾಲ್ಗಳಲ್ಲಿ
ಛಂಗನೆ ಹಾರುವ
ಜಿಂಕೆಯ ನೆಗೆತವಿತ್ತು..
ಮಗ್ಧ ಮನಸ ತುಂಬೆಲ್ಲಾ
ಸುಮ್ ಸುಮ್ನೆ ಚಿಮ್ಮುವ
ಪ್ರೀತಿ ಚಿಲುಮೆಯಿತ್ತು...


ಇಂದು-
ಆ ಕಾಲವೆಲ್ಲಾ ತುತ್ತಾದಂತಿದೆ
ಅಕಾಲ ಮರಣದ
ಸೂತಕದಂತೆ
ಭಾಸವಾಗುತಿದೆ, ಕನಸುಗಳೆಲ್ಲಾ
ಕುರುಡು ಕಾಂಚಣದ
ಕಾಲಡಿಗೆ ಸಿಕ್ಕಂತೆ.......


ಬದುಕಿನಾ ಗಾಲಿಗಳ
ತಿರುಗಿಸುವ ಭರದಲ್ಲಿ
ಹೂತು ಹೋಗುವ ಮಣ್ಣು
ಕಾಣಲಿಲ್ಲ..
ಸಂಸಾರ ಸಾಗರದ
ನಿಸ್ಸಾರ ಸಾರದಲಿ
ಸಿಲುಕಿ ಬರಡಾಗಿವೆ
ನಗೆಗಳೆಲ್ಲಾ......

****** ರಾಘವ್.


7 comments:

  1. ನೀವು 'ಪ್ರೀತಿ'ಯ ಬಗ್ಗೆ ತುಂಬ ಸೊಗಸಾಗಿ ಬರೆಯುತ್ತೀರ..
    ಹೀಗೆ ಮುಂದುವರೆಸಿ...

    ReplyDelete
  2. ವೀಣಾ ಮರೀ......... ಥ್ಯಾಂಕ್ಯೂ....

    ******

    @nsru

    ಧನ್ಯವಾದಾ ಜೀ....
    ನೀವೂ ಹೀಗೇ ಓದ್ತಾ ಇರಿ....
    ಅದೇ ನಮಗೆ ಪ್ರೋತ್ಸಾಹ.

    *******

    ReplyDelete
  3. ಶತ ಪ್ರಯತ್ನದ ನಂತರ ನಿಮ್ಮ ಕವನ ಓದಿದೆ. ಚನ್ನಾಗಿದೆ

    ReplyDelete
  4. ಆಶಾ ದೀದೀ....
    ಅಂತೂ ಯಶಸ್ವಿ ಆದ್ರಲ್ಲಾ......
    ಖುಷಿಯಾಯ್ತು......

    ReplyDelete