ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, June 22, 2012

ಅಂದು ಕೈ ಜಾರಿದ ಪಾರಿಜಾತ ನೀನು.......

       ಏನೂ ಗೊತ್ತಗ್ತಾ ಇಲ್ಲಾ.... ಏನೂಂದ್ರೆ ಏನೂ ಗೊತ್ತಾಗ್ತಾ ಇಲ್ಲಾ.... ನನ್ನ ಕೊನೆಯ exam ನಲ್ಲಾದ್ರೂ ಇಷ್ಟು ಚಂದ ಮಾಡಿ ಪೇಪರ್ ಹಾಗೂ ಪೆನ್ನನ್ನು ರೆಡಿ ಮಾಡಿಕೊಂಡು ಬಂದು ಬರೆಯಲು ಕುಂತಿಲ್ಲಾ.... ಅಂಥಾದ್ದರಲ್ಲಿ ನಿನಗಾಗಿ.........


ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹೃದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ ||


   






You are lucky ಕಣೇ... ಹಂಗಂತ ನೀನು ತಿಳ್ಕೊಂಡ್ರೆ I am very lucky.  ನಿಂಗೊತ್ತಾ B.Com ಗೆ ಅಂತಾ college ಗೆ ನೀನು enter  ಆದ ದಿನ ....ಆವತ್ತು ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ... ಸುಮಾದು. She is real beauty  ಅಂತ... ಅದೆಷ್ಟು ಹುಡುಗರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ..... ನೀನೇನೂ  ನನ್ನನ್ನೇ ಅಂತಾ ನೋಡಿಲ್ಲ.. ಸಹಜವಾಗಿಯೇ ನೋಡಿದರೂ ನನ್ ಮನ್ಸು ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲಾ... ಇನ್ನೂ ನನಗರ್ಥವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ.... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು  ಕುಳಿತು ಬಿಟ್ಟೆಯಾ ಅಂತ...?

     ಮೊದಲ ದಿನದಿಂದ್ಲೇ ನಿನ್ನನ್ನು ನೋಡ್ತಿದೀನಿ ಕಣೆ... ಗುಂಪಿನಲ್ಲಿ ಗೋವಿಂದ ಆಗ್ಬೇಕು ಅಂದ್ಕೋತೀಯಾ....  ಆದರೆ ಕೋಹಿನೂರ್ ವಜ್ರದಂತಹ .. ಹೊಳೆವ ಕಳ್ಳಿ ನೀನು.... ಹೃದಯ ಕದ್ದು ತನಗೆ ಗೊತ್ತೇ ಇಲ್ಲಾ ಅನ್ನೋ ಥರಾ ಹೋಗ್ತಿರ್ತೀಯಾ.. ನನ್ನ ಕಣ್ಣನ್ನು ಮಾತ್ರ ತಪ್ಪಿಸಿಕೊಂಡು ಹೋಗಲಿಕ್ಕೆ ಆಗ್ಲೇ ಇಲ್ವಲ್ಲೇ .....

      ನೀನು ಎದುರಾದಾಗಲೆಲ್ಲಾ ಕಳ್ಳಿ ನೀನು ಹೃದಯ ಕದ್ದಿದೀಯಾ ಅನ್ಬೇಕು ಅಂದ್ಕೋತೀನಿ.... ಇನ್ನೂವರೆಗೂ ಆಗ್ಲೇ ಇಲ್ಲಾ.... ನನ್ನ ಹೃದಯವನ್ನು ನನಗೆ ಮರಳಿ ಕೊಡ್ತೀಯೇನೋ ಅಂತ ಕಾಯ್ತಾ ಇದೀನಿ...  ಕೊಟ್ಟಿಲ್ಲಾ ನೀನು.. ಕೊಡೋಲ್ಲಾ ನೀನು ಪಾಪಿ... ಕೊನೇ ಪಕ್ಷ ಮರಳಿ ಕೊಡೋದಿಕ್ಕಾ  ಹುಡುಗಾ ನಾನು ಕದ್ದುದ್ದು  ಅಂತಾದ್ರೂ ಒಂದ್ಮಾತು ಹೇಳ್ಬಹುದಿತ್ತಲ್ಲಾ.... ಯಾಕೆ ಕಾಡಿಸ್ತೀಯಾ.....

     ಆವತ್ತೊಂದು ದಿನ ಆ ಪುಡಿ ಬಣ್ಣದ ಪುಟ್ಟ ಚುಡಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ನಡೆದು ಬಂದು ಅದೆಷ್ಟು ಮಧು ಮಧುರವಾಗಿ ದಿಟ್ಟಿಸಿದ್ದೆ..  ಆಚೂಡಿಯ ಹೊಳೆವ ಝರಿಯಂಚು ನಿನ್ನ ಗೆಜ್ಜೆಗೆ ಸಿಕ್ಕಿ ನೀ ಎಡವಿದಂತಾದಾಗ.. ನನಗೇ ಗೊತ್ತಿಲ್ಲದಂತೆ ಎರಡೆಜ್ಜೆ ಮುಂದೆ ಬಂದು  "ಏ" ಅಂದಿದ್ದೆ... ನೆನಪಿದೆಯಲ್ವಾ.....? ಅದನ್ನು ಎಷ್ಟು ಚುರುಕಾಗಿ ಗಮನಿಸಿ ಮುಗುಳು ನಕ್ಕಿದ್ದೆಯಲ್ಲಾ... ನನ್ನೆದೆಯನ್ನು ನಗಾರಿ ಮಾಡಿಸಿ....ಪಾಪಿ ಯಾಕೇ ಗೊತ್ತಾಗಿಲ್ಲಾ ನಿನಗೆ ಇದು ಪ್ರೀತಿ ಅಂತಾ.......

 ಹೀಗೇ ದಿನಂಪ್ರತಿ ಏನೇನೋ ತೊಳಲಾಟಗಳ ನಡುವೆಯಲ್ಲೆಲ್ಲೋ ಅಂದ್ಕೊಂಡ್ಬಿಟ್ಟಿದ್ದೀನಿ ಇದು ಪ್ರೀತಿ ಅಂತಾ....

       ಧೈರ್ಯ ಮಾಡಿ ಚಂದ ಚಂದಾಗಿ ಒಂದು ಪ್ರೇಮ ಪತ್ರ ಬರೆದು ಬಿಟ್ಟೆನಲ್ಲಾ... ಎಷ್ಟು ಕಸರತ್ತಿನಿಂದ.... ಬೆಳೆಗೆರೆ ಸಾಹಿತ್ಯ ಶೈಲಿ... ಭೈರಪ್ಪನ ತುಂಟು ಕಲ್ಪನೆ.... ಕೆ.ಎಸ್.ನ ಪ್ರೇಮ ಕಾವ್ಯಧಾರೆ.... ಎಲ್ಲಾ ಸೇರಿಸಿ ನಿನಗಾಗಿ ಒಂದು ಪ್ರೇಮ ಲಕೋಟೆ  ಸಿದ್ದಪಡಿಸಿಬಿಟ್ಟೆನಲ್ಲಾ... ತಾಜಮಹಲಿನಷ್ಟು ಪ್ರೀತಿಯಿಂದ.....

        ಬೆಚ್ಚಗೆ ಪ್ರೀತಿಯಿಂದ ಲಕೋಟೆಯೊಳಗೆ ಮಡಿಸಿಟ್ಟ ಆ ಪತ್ರಾನಾ ನಿನ್ನ ಮಡಿಲಿಗೆ ಹಾಕಬೇಕಂತ ಾವತ್ತು exam ನ ಕೊನೇ ದಿನ ಎಷ್ಟೊತ್ತಿನಿಂದ ಕಾದು ಕುಳಿತಿದ್ದೆ ಗೊತ್ತಾ... ಕೊನೆಗೂ ನೀ ಒಬ್ಳೇ ಬಂದುಬಿಟ್ಟೆ... ನಿನಗೆ ಕೊಡಬೇಕಂತ ಅಂದುಕೊಳ್ಳುವಷ್ಟರಲ್ಲೇ ಧೈರ್ಯ ಉಡುಗಿ... ಕೈ ನಡುಗಿ....ಮಾತು ತೊದಲಿ Best  of luck ಅಂತ ಮಾತ್ರ ಅಂದು ಬಂದುಬಿಟ್ನಲ್ಲಾ...

ಅಂದು ಕೈ ಜಾರಿದವಳು ನೀನು ಇನ್ನೂ ಸಿಕ್ಕೇ ಇಲ್ವಲ್ಲೇ..... 
ನನ್ನ ಮನದ ಜಾತ್ರೆಯಲ್ಲಿ ಸುಳಿದ ಜಾಜಿ ಕಣೇ ನೀನು... ಒಂದು ಬಾರಿ ಬಂದು ಬಿಡು ಗೆಳತಿ....
ಓಲೆ ಕೈಲಿಡಿದು ಕಾಯುತ್ತಿದ್ದೇನೆ....
ಹೃದಯ ತುಂಬೆಲ್ಲಾ ಕನಸ ಹೊತ್ತು......
............................. ನಾನು ನಿನ್ನವನು.

-ರಾಘವ್ ಲಾಲಗುಳಿ.