ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, March 24, 2010

ನಿನ್ನ ನೆನಪಿಲ್ಲದೆಯೇ ಕಳೆಯಲೆಂತು....












ನಿನ್ನ ನೆನಪಿಲ್ಲದೆಯೇ
ಕಳೆಯಲೆಂತು....
ಭಾವನೆಯ ದಾಳಿಗಳ
ತಡೆಯಲೆಂತು.... ||

ಮೊದಲೆಲ್ಲ ನೆನಪಿಲ್ಲ
ಭಾವ ದಾಳಿಯೂ ಇಲ್ಲಾ..
ಹುರುಪು ಮಾಧುರ್ಯಗಳು..
ಇರಲೇ ಇಲ್ಲಾ
ಜೀವನಕುನ್ಮಾದಗತಿ
ಬರಲೇ ಇಲ್ಲಾ.. ||

ಕಾಲ ಸರಿಯಿತು ಮುಂದೆ
ಕಣ್ಮುಂದೆ ನೀ ಬಂದೆ..
ಮಧುರ ಸಂಬಂಧದ ನೆಪವ ಹಿಡಿದು..
ಕಲ್ಪಾಂತ ಮನದ ಪ್ರವಾಹ ತಡೆದು..
ಬಂದಿತ್ತು ಹಸಿ ಮನದ
ಹುಚ್ಚು ಹೊಳೆ ಹರಿದು
ಮನದ ಬೇಗೆಯ ಮೂಲವೆಲ್ಲ ಉರಿದು.. ||

ಈಗ ನೀನಿಲ್ಲ
ಉಳಿದಿರುವೆ ನಾನೊಬ್ಬ
ನಿನ್ನ ನೆನಪಿಲ್ಲದೆಯೇ ಕಳೆಯಲೆಂತು.....
ನಿನ್ನ ನೆನಪೊಂದೆ ನನಗೆಂದೂ ಹಬ್ಬ...
ಭಾವನೆಯ ದಾಳಿಗಳ
ತಡೆಯಲೆಂತು?.. ||
- ರಾಘವ..

No comments:

Post a Comment