ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, June 3, 2010

ನೀನೊಂದು ಮುಗ್ಧ ರಾಜಕುಮಾರಿ [ಪಾಪುಮರಿಗೆ]


ನೀನೊಂದು ಗೊಂಬೆ ಕಣೇ....
ನಿನ್ನ
ಮುಖ ನೋಡಿದರೇನೇ ಅನ್ಸಿಬಿಡುತ್ತೆ.. ನೀನೊಂದು ಮುಗ್ಧ ರಾಜಕುಮಾರಿ ಅಂತ. ಎಷ್ಟು ಶಾಂತ..... ಇಷ್ಟವಾಗಿರೋದು ಅದಕ್ಕೇನೇ... ಚಂದ ಚಂದಗೆ ಎಳಸು ಎಳಸಾಗಿ ಬರುವ ಶುದ್ಧ ಮಾತು... ಎಳೆಯ ಮಗುವಿನ ಹಾಗೆ ಗೊಂಬೆಗಳ ಜೊತೆ ಇರುವ ನಿನ್ನ ರೀತಿ... ಎಲ್ಲವೂ ಇಷ್ಟವಾಗಿರೋವಾಗ "ನಾನಂದ್ರೆ ಎಷ್ಟು ಇಷ್ಟ" ಅನ್ನೋ ಪ್ರಶ್ನೆಗೆ ಯಾವ ಪ್ರಮಾಣದಲ್ಲಿ ಇಷ್ಟದ ಅಳತೆಗೋಲನ್ನು ತೋರಿಸಲಿ?
ಹೇಯ್ ಗಿಳಿ,,,
ಆಡಿದ ಮಾತುಗಳು ಕೆಲವೇ ಕ್ಷಣಗಳದ್ದಿರಬಹುದು... ಆದರೆ ಮೌನವಾಗಿ ಪ್ರಹರಿಸುವ ಸ್ನೇಹ ಗಂಗೆಯ ಅಂತರ್ ಹರಿವಿಗೆ,, ಅದರ
ಸ್ಪಂದನೆಗೆ ಅದಾವ ಶಬ್ಧದ ಹಂಗು.. ಹೂಂ?
ಯಾಕೋ ಗೊತ್ತಿಲ್ಲಾ ಚಿನ್ನುಮರಿ... ನಿನ್ನನ್ನು ಮಾತ್ರ ನಾನು ನನ್ನ ಮನಸ್ಸಿನಲ್ಲಿ ಮುಗ್ಧತೆಗಿಂತಲೂ ಮುಗ್ಧವಾಗಿ ಕಲ್ಪಿಸಿಕೊಂಡಿದ್ದೇನೆ. ಅದು ಯಾವತ್ತೂ ಅಳಿಸಲಾಗದ ಛಾಯೆಯಾಗಿ ಹಚ್ಚೆಯಾಗಿ ಕೂತುಬಿಟ್ಟಿದೆ ಎದೆಯಲ್ಲಿ.
ಆವಾಗ್ಲೇ ಹೇಳ್ಬಿಟ್ಟಿದೀನಲ್ಲಾ ನೀನೊಂದು ಮಗು ಅಂತ... ಮಗುವಿನ ಚೈತನ್ಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇರುವುದಿಲ್ಲ ಹಾಗೆ.....
ನೀ
ನೊಂದು ಹೊಚ್ಚ ಹೊಸ ಕನ್ನಡಿಯಿದ್ದಂತೆ... ಒಂದೇ ಒಂದು ಪ್ರತಿಬಿಂಬವೂ ಅದರಲ್ಲಿ ಮೂಡಿಲ್ಲಾ....
ನಿನ್ನ ಪುಟ್ಟ ಕಂಗಳ ಮುಗ್ಧ ನೋಟದಲ್ಲಿ ಹೊಳೆವ ಹೊಳಪಿನ ಕನಸುಗಳೆಲ್ಲಾ ಬಿರಿವ ಮೊಗ್ಗಿನ ಸುವಾಸನೆ ಬೀರುವ ಸುಮಧುರ ಕನಸುಗಳು.
ಕೆಲವು ಸುಂ
ದರ ಅನುಭೂತಿಗಳನ್ನು ಅವರವರ ಮನಸ್ಸಿನಲ್ಲಿಯೇ ಮನನ ಮಾಡಿಕೊಂಡು ಮನಸ್ಸಿನಲ್ಲಿಯೇ ಇರಿಸಿಕೊಂಡರೆ ಒಳ್ಳೆಯದು.

ಕದ್ದ ಸಾಲುಗಳ ಶುದ್ಧ ಭಾವ.....[ಪಾಪುಮರೀ ಇದು ನಿನಗೋಸ್ಕರ]

ಅವನು ಆತ್ಮಬಂಧು......
ಮಾತಿಗೊಮ್ಮೆ ಅವಳ ಮೈ ಕೈ ಮುಟ್ಟುವುದಿಲ್ಲ. ತಾಕಿ ಕೊಳೆ ಮಾಡಲ್ಲ. ಹಸಿದವನಂತೆ ಸದಾ ಆಕೆಯ ಸುತ್ತ ಪಹ
ರೆ ಸುತ್ತಲ್ಲ. ನಂಗೊತ್ತು ಅವಳನ್ನು ತುಂಬಾ ಇಷ್ಟ ಪಡ್ತಾನೆ. ಆದರೆ ಅವಳ ಮೈಯನ್ನಲ್ಲ. ತುಂಬಾ ಪ್ರೀತಿಸ್ತಾನೆ ಆದ್ರೆ ಸಂಬಂಧಕ್ಕೊಂದು ಹೆಸರಿಡಲ್ಲ. ಆಪತ್ತು ಬಂದಾಗ ಸಹಾಯಕ್ಕೆ ನಿಲ್ಲುತ್ತಾನೆ.ಸಂಭ್ರಮದ ಕ್ಷಣಗಳಲ್ಲಿ ತಕ್ಷಣ ನೆನಪಾಗುತ್ತಾನೆ. ಯಾಕೋ ಯಾವುದೂ ಬೇಡವೆನಿಸಿದಾಗ ಒಬ್ಬಳನ್ನೇ ತನ್ನ ಪಾಡಿಗೆ ತಾನು ಇರಲು ಬಿಟ್ಟುಬಿಡುತ್ತಾನೆ. ಆಜೆಯ ಕಷ್ಟ ಸುಖಗಳನ್ನು ಕೇಳುತ್ತಾನೆ. ತನ್ನ ನಲಿವುಗಳನ್ನು ಹಂಚಿಕೊಳ್ಳುತ್ತಾನೆ. ಅವನು ಗಂಡನಲ್ಲ,ಪ್ರಿಯಕರನಲ್ಲ,ಸವಕಲಾಗಿ ಹೋಗಿರುವ ಶಬ್ಧ "Best Friend" ಅಂತೀವಲ್ಲ ಅದೂ ಅಲ್ಲ.
ಅವ
ರಿಬ್ಬರ ಸಂಬಂಧಕ್ಕೆ ಇಂಥವೇ ಅಂಥ ಒಂದು ಹೆಸರಿಲ್ಲ. ಯಾವತ್ತೋ ಒಂದು ದಿನ ಆಕೆಯನ್ನು ಪಡೆದೇ ತೀರಬೇಕು ಅನ್ನೋ ಧಾವಂತವಿಲ್ಲ. ಅವಳು ಸ್ವೀಕರಿಸದಿದ್ದರೆ ಏನಾದೀತು ಅನ್ನೋ ಆತಂಕವಿಲ್ಲ. ಆದರೂ ಸಹ ಯಾವತ್ತೂ ಜೊತೆಯಾಗಿರುವ ಭರವಸೆ ಕೊಡುತ್ತಾನೆ. ನೊಂದ ಜೀವಕ್ಕೆ ಕೊಂಚ ಮಟ್ಟಿಗಾದರೂ ಸಾಂತ್ವನ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡ್ತಾನೆ.....
ಅವನೇ ನಿಜವಾದ ಆತ್ಮಬಂಧು.....