ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....
ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
ಕಾಡು ಪುಷ್ಪವಾದರೇನು
ಬೀರಿತದರ ಪ್ರೀತಿ
ಕಣ್ಣ ತುಂಬ ಕನಸ ಹೊತ್ತು
ಅರಳಿ ನಿಂತ ರೀತಿ ||
ಕಾಡು ಪುಷ್ಪವಾದರೇನು
ಹಾಸಿ ತನ್ನ ಸೆರಗು
ಕೊಡಲಿಲ್ಲವೇನು ತಾನು
ಅರಳಿ ನಿಂತು ಮೆರಗು||
ಕಾಡು ಪುಷ್ಪವಾದರೂನು
ಅರಳಿ ತನ್ನ ಆಸೆಗೆ
ಸೋಗು ಹಾಕಿ ಮೆರೆದಿಲ್ಲವೇ
ಪ್ರಕೃತಿಯೊಡಲ ಭಾಶೆಗೆ||
ಕಾಡು ಪುಷ್ಪವಾದರೇನು
ಇರಲಾರದೇ ಕನಸು
ಹತ್ತು ಕನಸ ಹೊತ್ತು ನಿಂತು
ನನಸಾಗಿಸೋ ಮನಸು ||
----------- ರಾಘವ್.