ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, July 13, 2011

ಅಂದು-ಇಂದು....


ಅಂದು-
ಪುಟ್ಟ ಹೊಳೆವ ಕಣ್ಣುಗಳಲ್ಲಿ
ಚಂದ ಚಂದನೆಯ
ಕನಸಿತ್ತು
ಮನಸಿನಲಿ ಕನಸ
ನನಸಾಗಿಸುವ ಛಲವಿತ್ತು..


ಅಂದು-
ನಿನ್ನ ಗೆಜ್ಜೆ ಕಟ್ಟಿದ ಕಾಲ್ಗಳಲ್ಲಿ
ಛಂಗನೆ ಹಾರುವ
ಜಿಂಕೆಯ ನೆಗೆತವಿತ್ತು..
ಮಗ್ಧ ಮನಸ ತುಂಬೆಲ್ಲಾ
ಸುಮ್ ಸುಮ್ನೆ ಚಿಮ್ಮುವ
ಪ್ರೀತಿ ಚಿಲುಮೆಯಿತ್ತು...


ಇಂದು-
ಆ ಕಾಲವೆಲ್ಲಾ ತುತ್ತಾದಂತಿದೆ
ಅಕಾಲ ಮರಣದ
ಸೂತಕದಂತೆ
ಭಾಸವಾಗುತಿದೆ, ಕನಸುಗಳೆಲ್ಲಾ
ಕುರುಡು ಕಾಂಚಣದ
ಕಾಲಡಿಗೆ ಸಿಕ್ಕಂತೆ.......


ಬದುಕಿನಾ ಗಾಲಿಗಳ
ತಿರುಗಿಸುವ ಭರದಲ್ಲಿ
ಹೂತು ಹೋಗುವ ಮಣ್ಣು
ಕಾಣಲಿಲ್ಲ..
ಸಂಸಾರ ಸಾಗರದ
ನಿಸ್ಸಾರ ಸಾರದಲಿ
ಸಿಲುಕಿ ಬರಡಾಗಿವೆ
ನಗೆಗಳೆಲ್ಲಾ......

****** ರಾಘವ್.