ಸಮುದ್ರದ ಪ್ರೀತಿ ಉಕ್ಕಿಬಿಟ್ಟಿದೆ ಇಂದು…
ಈ ಸಮುದ್ರಕ್ಯಾಕೋ ಚಂದ್ರನ ಮೇಲೆ ಈ ಪರಿ ವ್ಯಾಮೋಹ? ಅದೆಷ್ಟು ಕಾಲ ಈ ಸಮುದ್ರವು ಉಕ್ಕಿ ಬರುವ ಪ್ರೀತಿಗೆ ಹೋಲಿಕೆಯಾಗಿತ್ತೋ… ಹುಣ್ಣಿಮೆಯ ಚಂದ್ರನ ನೋಡಿ ಉಕ್ಕಿ ಬರುವ ಸಾಗರದಂತೆ ಎಂದು ಅದೆಷ್ಟು ಕವಿಗಳು ವಣಿðಸಿದ್ದರೋ…? ಅವುಗಳನ್ನೆಲ್ಲವನ್ನೂ ನಿಜ ಮಾಡಲೆಂಬಂತೆ ಉಕ್ಕಿಬಿಟ್ಟಿದೆ ಇಂದು….
ಈ ಸಾಗರದ ದಡದಲ್ಲಿ ಕನಸು ಕಟ್ಟಿದವರೆಷ್ಟು ಮಂದಿಯೋ…. ಸಾಗರದ ದಡದಲ್ಲೊಂದು ಮನೆ ಮಾಡಬೇಕು… ಏರೇರಿ ಬರುವ ತೆರೆಗಳನ್ನು ನೋಡ್ತಾ ಇರಬೇಕು…. ಸಮುದ್ರದ ಮೊರೆತ ಕಿವಿಯ ಮೇಲೆ ಯಾವಾಗಲೂ ಕೇಳ್ತಿರಬೇಕು…… ಕಣ್ಣ ತುಂಬೆಲ್ಲಾ ಸಮುದ್ರವೇ ಹರಡಿರಬೇಕು…. ಹುಣ್ಣಿಮೆಯ ರಾತ್ರಿ ಮರಳ ದಡದ ಮೇಲೆ ಕುಳಿತು ಚಂದ್ರನಿಗಾಗಿ ಉಕ್ಕುಕ್ಕಿ ಬರುವ ಸಮುದ್ರವನ್ನು ನೋಡ್ತಾ ಆನಂದ ಪಡಬೇಕು ಅಂದುಕೊಂಡು ಸಾಗರದ ದಡದ ಮೇಲೆ ಅದೆಷ್ಟು ಸಾವಿರ ಸಾವಿರ ಮಂದಿ ಬೀಡು ಬಿಟ್ಟಿದ್ದರೋ…….. ಕೊನೆಗೂ ಸಮುದ್ರವು ತನ್ನ ಪ್ರೀತಿಯ ಕಟ್ಟೆ ಒಡೆದೇ ಬಿಟ್ಟಿತಲ್ಲಾ….
ಇಷ್ಟು ವಷðಗಳ ಕಾಲ ಕೈಗೆ ಸಿಗದ ಚಂದಿರನಿಗಾಗಿ ಉಕ್ಕಿ ಉಕ್ಕಿ ಸುಸ್ತಾಗಿ ಬೇಸತ್ತು ಬಿಟ್ಟಿತ್ತೇನೋ….. ಭೂಮಿಗೆ ಚಂದ್ರ ಹತ್ತಿರವಾಗೋ ದಿನಕ್ಕಾಗಿ ಆ ಸಾಗರವೂ ಕಾಯುತ್ತಿದ್ದಿರಬೇಕು…. ಹತ್ತಿರವಾಗಿಯೇ ಬಿಟ್ಟಿತಲ್ಲಾ…. ಕೊನೆಯ ಬಾರಿಯ ಪ್ರಯತ್ನಕ್ಕೊಂದು ಮುನ್ನಾ ತಯಾರಿಯ ರೀತಿಯಲ್ಲಿ… ಚಂದಿರನ ಹೆಗಲೇರಿ ಕುಂತುಬಿಡುವ ಆಸೆಯಲ್ಲಿ ಉಕ್ಕಿ ಬಿಟ್ಟಿತಲ್ಲಾ… ಎರಡು ಕೋಟಿ ಜೀವಗಳನ್ನು ತೆಕ್ಕೆಯಲ್ಲಿ ಉಸಿರುಗಟ್ಟಿಸಿಯಾದರೂ ಸರಿ ಚಂದ್ರನ ಸೇರಲೇ ಬೇಕೆಂಬ ಸಾಗರದ ನಿದðಯೀ ಸ್ವಾಥð ಪ್ರೀತಿಯಾ ಇದು?
ಹೌದು ಇದೇ ಬರುವ ಹುಣ್ಣಿಮೆಗೆ ತಾನೇ ಭೂಮಿಗೆ ಚಂದ್ರನು ಅತೀ ಸಮೀಪದಲ್ಲಿ ಬರೋದು… ಹದಿನೆಂಟಕ್ಕೆ ಹುಣ್ಣಿಮೆ ಈವತ್ತಿನ್ನೂ ಹನ್ನೊಂದು….. ಮುನ್ನಾ ತಯಾರಿಯಾಗಿಯೇ ಲಕ್ಷಾಂತರ ಜನರನ್ನು ಒಂದಿಡೀ ದೇಶವನ್ನು ಬಲಿತೆಗೆದುಕೊಂಡ ಮೇಲಾದರೂ ಹಸಿದ ಬಿಸಿ ತಣಿದಿದೆಯೋ ಏನೋ…. ಸಾಗರದ ಒಡಲಿನ ಹಸಿವಿನ ಬಿಸಿ ಇಷ್ಟಾಗಿಯೂ ಆರದಿದ್ದರೆ ಹದಿನೆಂಟರೊಳಗೆ ಇನ್ನೆಷ್ಟು ಜೀವಗಳ ಬಲಿಯಿದೆಯೋ… ಹಾಗಾಗದಿರಲಿ….
ಭೂಮಿ ನುಂಗುವ ಬಯಕೆ ನಿನಗೂ ಶುರುವಾಯಿತಾ?...
ಪದೇ ಪದೇ ಜಪಾನಿನ ಮೇಲೇ ಕಣ್ಣು...
ಮನೆಗಳೆಂದರೆ ಜನಗಳೆಂದರೆ ಜೀವವಿಲ್ಲದ ಕಲ್ಲಿದ್ದಲ್ಲಿನಂತೆ ಸುಟ್ಟು ಕರಕಲಾಗಿಬಿಟ್ಟವು.
ಅಣು ಬಾಂಬ್ ನ ಮೊದಲ ಅನುಭವದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆಘಾತ.
ನಗರದ ತುಂಬೆಲ್ಲಾ ಕರಾಳ ಮೌನ.
ಅಣು ಅಣುವಿನಲ್ಲೂ ಅಪಾಯ ತುಂಬಿರುವ ಅಣು ಸ್ಥಾವರಕ್ಕೇ ಬೆಂಕಿ
ಜಪಾನ್ ಶ್ರಮಜೀವಿಗಳ ದೇಶ. ಹಿಂದೊಂದು ಯುದ್ಧದ ಸಮಯದಲ್ಲಿ ಪೂರ್ತಿ ನೆಲಸಮವಾದ ದೇಶ ಎಷ್ಟು ಬೇಗ ಎದ್ದು ನಿಂತಿತ್ತು... ಏಳುವಷ್ಟರಲ್ಲಿ ಬೀಳಲಿಕ್ಕಾಯಿತು. ಮತ್ತಂತಹುದೇ ದುರಂತ...
ನಿರುಪದ್ರವೀ ದೇಶಕ್ಕೆ ಪ್ರಪಂಚದ ಎರಡನೇ ಬಲಿಷ್ಟ ದೇಶಕ್ಕೆ ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ ಈ ದೇಶಕ್ಕೆ ಒದಗಿದ ಈ ಆಘಾತ ನಿಜಕ್ಕೂ ವಿಷಾದನೀಯ.
ದೇಶವೆಲ್ಲಾ ಕಸದ ತೊಟ್ಟಿಯಾಯಿತಲ್ಲಾ...
ನೆಲವೆಲ್ಲ ಮುಳುಗಿ ನೆನಪೊಂದುಳಿಯಿತಾ?
ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ.
ಎಷ್ಟು ಭಯಂಕರ ಇರಬೇಕಲ್ವಾ.....
ಪ್ರಳಯದ ಕಲ್ಪನೆ ನಿಜವಾಗುತ್ತಿದೆಯಾ........ ಕಣ್ಣಾರೆ ಕಂಡ ಮೇಲೆ ಏನನ್ನೋಣ....