ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, May 28, 2010

ತಲೆಯೆತ್ತಿ ಆಕಾಶದೆತ್ತರಕ್ಕೆ ಕಣ್ಣು ಹಾಯುವವರೆಗೆ ನೋಡಿದರೂ ಬದುಕಿನ ಅಥಱ ನಿಲುಕುವುದಿಲ್ಲ.
ಬದುಕು ಅಂದರೆ ಇದೇ ಅಂತ ಯಾವುದನ್ನೂ ಹೇಳುವುದಕ್ಕೆ ಬರುವುದಿಲ್ಲ.
because ಪ್ರಪಂಚದ ಪ್ರತಿಯೊಬ್ಬನೂ ಕೂಡಾ
ಅವನ ಅನುಭವದ ಮೇರೆಗೆ ಬದುಕನ್ನು ಸೆರೆಹಿಡಿಯುತ್ತಾನೆ.
ನಮ್ಮ ಬದುಕಿನ ಪದವನ್ನು ಮಾತ್ರ ನಾವೇ ಜೋಡಿಸಬೇಕು......
ಸಂತಸದ ಛಾಯೆ ಬರುವ ಹಾಗೆ.......
ನಮ್ಮ ಬದುಕಿನ ನಡುವೆ ಆಗುಹೋಗುಗಳು ಹೇಗೇ ಬಂದ್ರೂ ನಾವು ಹೇಗೆ ಸ್ವೀಕರಿಸುತ್ತೇವೆಯೋ ಹಾಗೆ ಅದು ನಮ್ಮ ಪಾಲಿಗೆ ಬದಲಾಗುತ್ತವೆ.
ನೋವುಗಳು ದುಃಖಗಳು ಮನುಷ್ಯನಿಗೆ ಶಾಶ್ವತವಲ್ಲ..
ವಿಷಯ ಏನೆಂದರೆ ನೋವುಗಳು ದುಃಖಗಳು ಸಣ್ಣ ಪುಟ್ಟ ಬೇಸರಗಳು ಇಲ್ಲದೇ ಹೋದರೆ ಬದುಕಿನಲ್ಲಿ ಸಂತಸದ ಉನ್ಮಾದ ಹೇಗಿರುತ್ತದೆಯೆಂಬುದನ್ನು ನಾವು ಅರಿಯಲಿಕ್ಕೇ ಸಾಧ್ಯವಾಗುತ್ತಿರಲಿಲ್ಲವೇನೋ....
ಮನುಷ್ಯ ಎಷ್ಟು ಹೆಚ್ಚು ನೋವು ಅನುಭವಿಸುತ್ತಾನೋ ಅಷ್ಟು ಹೆಚ್ಚು ಸುಖವನ್ನು ಕೂಡಾ..... ಅನುಭವಿಸುತ್ತಾನೆ.


No comments:

Post a Comment